Posts

Showing posts from January, 2024

ಭಾರತಕ್ಕೆ ಪಾಕಿಸ್ತಾನದ ವಿರುದ್ಧ ಯುದ್ಧ ಅನಿವಾರ್ಯವೇ?

 ಭಾರತಕ್ಕೆ ಪಾಕಿಸ್ತಾನದ ವಿರುದ್ಧ ಯುದ್ಧ ಅನಿವಾರ್ಯವೇ? ಮುಳುಗುತ್ತಿರುವ ಹಡಗಿಗೆ ಕಲ್ಲೆಸೆದ ಅಪವಾದ ಬೇಕೇ?  ಪ್ರತಿಯೊಂದು ಉಗ್ರಗಾಮಿ ದಾಳಿಯ ನಂತರ ಪ್ರತಿಯೊಬ್ಬ ದೇಶಭಕ್ತ ಭಾರತೀಯನ ಮನಸ್ಸಿನಲ್ಲಿ ಮೂಡುವ ಆಕ್ರೋಶದ ತೀರ್ಮಾನವೆಂದರೆ ಇನ್ನು ಸಾಧ್ಯವಿಲ್ಲ, ಯುದ್ಧವೊಂದೇ ಪರಿಹಾರ ಎಂಬುದು. ಪ್ರತಿನಿತ್ಯ ನಮ್ಮ ಸೈನಿಕರು ದೇಶಕ್ಕಾಗಿ ಹುತಾತ್ಮರಾಗುವುದನ್ನು ನೋಡುತ್ತಾ ಸುಮ್ಮನೇ ಕೂತುಕೊಳ್ಳಲು ಯಾವ ಭಾರತೀಯನೂ ಒಪ್ಪುವುದಿಲ್ಲ. ಆದರೆ ಇಡೀ ದೇಶದ ಜನತೆ ಮತ್ತು ಮಾಧ್ಯಮಗಳು ಒಕ್ಕೊರಲಿನಿಂದ ಕೂಗಿದರೂ ಸರ್ಕಾರ ಅಥವಾ ಸೈನ್ಯ ಆ ತೀರ್ಮಾಣಕ್ಕೆ ತಕ್ಷಣಕ್ಕೆ ಬರುವುದಿಲ್ಲ. ಭಾರತಕ್ಕೆ ಪಾಕಿಸ್ತಾನದ ವಿರುದ್ಧ ಯುದ್ಧ ಅನಿವಾರ್ಯವೇ? ಅಥವಾ ಇಲ್ಲವೇ?   ಯುದ್ಧ ಅನಿವಾರ್ಯವೆಂಬ ತೀರ್ಮಾಣಕ್ಕೆ ಬರುವ ಮೊದಲು ಹಲವಾರು ಅಂಶಗಳನ್ನು ನಾವು ಗಮನಿಸಬೇಕಾಗುತ್ತದೆ. ಪ್ರಾಚೀನ ಕಾಲದಲ್ಲಿ ಎರಡು ರಾಜ್ಯಗಳ ನಡುವೆ ಆಗುತ್ತಿದ್ದ ಯುದ್ಧಗಳಲ್ಲಿ ಬಿಲ್ಲು-ಬಾಣ, ಕತ್ತಿ, ಭರ್ಚಿ ಮುಂತಾದ ಕೆಲವೊಂದು ಆಯುಧಗಳ ಬಳಕೆಯಿಂದ ಹಲವಾರು ಸೈನಿಕರು ಸಾಯುತ್ತಿದ್ದರು, ಕೊನೆಗೆ ಒಂದು ರಾಜ್ಯದ ರಾಜ ಸೋತ ಅಥವಾ ಸತ್ತ ನಂತರ ಗೆದ್ದ ರಾಜ್ಯದ ರಾಜನ ಆಡಳಿತ ಅಲ್ಲಿ ಬರುತ್ತಿತ್ತು. ಸೋತ ರಾಜ್ಯದ ಜನತೆಗೆ ಯುದ್ಧದ ನೇರ ಪರಿಣಾಮ ಹೆಚ್ಚಿಗೆ ಆಗುತ್ತಿರಲಿಲ್ಲ. ಆದರೆ ಗೆದ್ದ ರಾಜ ಅಥವಾ ಅವನ ಸೈನಿಕರು ಕ್ರೂರಿಯಾಗಿದ್ದರೆ, ಸೋತ ರಾಜ್ಯದ, ಜನರ ಸಂಪತ್ತು ಲೂಟಿ, ಹತ್ಯೆ, ಅತ್ಯಾಚಾರ ಇ...

ನ್ಯಾಯವಾದಿ, ನ್ಯಾಯಾಂಗ, ಮಾಧ್ಯಮ ಹಾಗೂ ನಿಜ ಸಂಗತಿಗಳು

 ನ್ಯಾಯವಾದಿ, ನ್ಯಾಯಾಂಗ, ಮಾಧ್ಯಮ ಹಾಗೂ ನಿಜ ಸಂಗತಿಗಳು  ಕೆಲ ದಿನಗಳ ಹಿಂದೆ ಜನಾರ್ಧನ ರೆಡ್ಡಿಯನ್ನು ಬೆಂಗಳೂರಿನ ಸಿಟಿ ಸಿವ್ಹಿಲ ನ್ಯಾಯಾಲಯಕ್ಕೆ ತಂದಾಗ ಮಾಧ್ಯಮ ಮತ್ತು ನ್ಯಾಯವಾದಿಗಳಿಗೆ ಆದ ಸಂಘರ್ಷವು ವಿಕೋಪಕ್ಕೆ ತಿರುಗಿ ಹಲವಾರು ರೂಪಗಳನ್ನು ಪಡೆದು ಪ್ರಕರಣಗಳಾಗಿ ವಿಚಾರಣೆಯಲ್ಲಿವೆ.  ಇತ್ತೀಚೆಗೆ ಕರ್ನಾಟಕÀ ಉಚ್ಚ ನ್ಯಾಯಾಲಯದ ನ್ಯಾಯಾಧೀಶರು ಪ್ರಕರಣವೊಂದರಲ್ಲಿ, ಸಮರ್ಥವಾಗಿ ವಾದ ಮಂಡಿಸದ ಅಥವಾ ಇನ್ನಾವುದೋ ಕಾರಣಕ್ಕೆ ನ್ಯಾಯವಾದಿಯೊಬ್ಬರಿಗೆ ಕೋಪದಿಂದ ನೀವೆಲ್ಲ ವೃತ್ತಿ ಮಾಡಲು ಸಾಮರ್ಥ್ಯವಿಲ್ಲದೇ ಏಜೆಂಟರAತೆ ಕೆಲಸ ಮಾಡುತ್ತೀರಿ ಎಂದು ಮೂದಲಿಸಿದ್ದು, ವಕೀಲರ ಆಕ್ರೋಶಕ್ಕೆ ಮತ್ತು ಒಂದು ದಿನ ಕಾರ್ಯ ಕಲಾಪದ ಬಹಿಷ್ಕಾರಕ್ಕೆ ಕಾರಣವಾಯಿತು. ವಕೀಲರು ರಾಜಕಾರಿಣಿಗಳ ಏಜೆಂಟರಾಗಲೀ, ನ್ಯಾಯಾಧೀಶರ ಏಜೆಂಟರಾಗಲೀ ಎಲ್ಲವೂ ಅಪಾಯಕಾರಿಯೇ.  ಇಂಥ ಹತ್ತು ಹಲವು ಪ್ರಕರಣಗಳು ಮೇಲಿಂದ ಮೇಲೆ ಮರುಕಳಿಸುತ್ತಿದ್ದು, ಇಲ್ಲಿ ಏನಾಗಿದೆ ಎಂದರೆ, ಭಾರತೀಯರಾದ ನಾವು ಪ್ರತಿಯೊಂದನ್ನೂ ಭಾವನಾ ಪರವಶರಾಗಿ ನೋಡುವುದರಿಂದ ಸಮಸ್ಯೆಯ ಆಳಕ್ಕಿಳಿದು ಪರಿಹಾರ ಕಾಣುವ ವ್ಯವಧಾನ, ಧಾರ್ಢ್ಯತೆ ಮತ್ತು ಚಾಕಚಕ್ಯತೆಯನ್ನು ಮೈಗೂಡಿಸಿಕೊಳ್ಳದಿರುವುದು ಸ್ಪಷ್ಠವಾಗುತ್ತದೆ. ಆದ್ದರಿಂದ ಒಬ್ಬ ನ್ಯಾಯವಾದಿಯಾಗಿ ನಾನು ಈ ಪ್ರಕರಣಗಳÀನ್ನು ವಿಮರ್ಶಿಸುವುದಾಗಲೀ ನ್ಯಾಯವಾದಿಗಳನ್ನು ಸಮರ್ಥಿಸುವುದಾಗಲೀ ಮಾಡದೇ ಕೆಲ ಮೂಲಭೂತ ಪ್ರಶ್ನೆಗಳನ್ನು ಎತ್ತಿ ಅವುಗಳಿಗೆ ಉ...

ಠೇವಣಿದಾರರನ್ನು ನಡುನೀರಲ್ಲಿ ಕೈಬಿಡುವ ಅ'ಸಹಕಾರಿ' ಹಣಕಾಸು ಸಂಸ್ಥೆಗಳು

 ಠೇವಣಿದಾರರನ್ನು ನಡುನೀರಲ್ಲಿ ಕೈಬಿಡುವ ಅ'ಸಹಕಾರಿ' ಹಣಕಾಸು ಸಂಸ್ಥೆಗಳು  19ನೇ ಶತಮಾನದಲ್ಲಿ ಯುರೋಪಿನಲ್ಲಿ ಸಹಕಾರಿ ವ್ಯವಸ್ಥೆಯು ಮೊದಲಿಗೆ ಆರಂಭವಾಯಿತು. ಅದು ಸಹಭಾಗಿತ್ವದಲ್ಲಿ ಕೆಲವೇ ಜನರಿಂದ ತಮ್ಮ ಅನುಕೂಲಕ್ಕಾಗಿ ಮಾಡಿಕೊಂಡ ವ್ಯವಸ್ಥೆಯಾಗಿತ್ತು. ಅದು ಮುಂದೆ ದೊಡ್ಡದಾದ ವ್ಯವಸ್ಥೆಯಾಗಿ ರೂಪಗೊಂಡಿತು. ಬ್ಯಾಂಕಿAಗ ವ್ಯವಸ್ಥೆ ಪ್ರಬಲಗೊಂಡಿರದ ಕಾಲದಲ್ಲಿ ಭಾರತದಲ್ಲಿ ಖಾಸಗೀ ಲೇವಾದೇವಿದಾರರು ಮನಸೋ ಇಚ್ಛೆ ಬಡ್ಡಿ, ಚಕ್ರಬಡ್ಡಿ ಹೇರಿ ರೈತರ ಆಸ್ತಿಗಳನ್ನು ನುಂಗುತ್ತಿದ್ದರು. ಇದನ್ನು ಕೊನೆಗಾಣಿಸಲು ಬ್ರಿಟೀಷರ ಮದ್ರಾಸ ಸರ್ಕಾರವು 1904ರಲ್ಲಿ ಮೊಟ್ಟಮೊದಲ ಸಹಕಾರಿ ಸಂಸ್ಥೆ ಕಾಯ್ದೆ ಜಾರಿಗೆ ತಂದಿತು. ಇದು ಕೃಷಿಕರಿಗೆ ಮಾತ್ರ ಸಾಲ ನೀಡುವ ಸಂಸ್ಥೆಯಾಗಿತ್ತು. ಮುಂದೆ ಎಲ್ಲರಿಗೂ ಅನುಕೂಲವಾಗಲೆಂದು 1912 ರಲ್ಲಿ ಹೊಸ ಕಾಯ್ದೆ ಜಾರಿಗೆ ಬಂದಿತು. ತದನಂತರ ಸಹಕಾರಿ ವ್ಯವಸ್ಥೆಯು ವ್ಯಾಪಕ ಮಾನ್ಯತೆ, ಬೆಳವಣಿಗೆ ಹೊಂದಿ, ಇಂದು ಇದು ಹಲವಾರು ಕ್ಷೇತ್ರವನ್ನು ವ್ಯಾಪಿಸಿರುವುದು ಹೆಮ್ಮೆ ಪಡುವ ಇತಿಹಾಸ.   ಆದರೆ, ಇದರ ಜೊತೆ-ಜೊತೆಗೆ ಸಹಕಾರಿ ಎಂಬ ಹೆಸರಿನ ಮತ್ತು ತತ್ವದ ಮಹತ್ವ ಗೊತ್ತಿರದ ಲೋಭಿ ಜನರು ಎಲ್ಲೆಂದರಲ್ಲಿ ಸಹಕಾರಿ ಸಂಸ್ಥೆಗಳನ್ನು ಹುಟ್ಟು ಹಾಕಿ, ಜನರಿಗೆ ಸುಳ್ಳು ಭರವಸೆ, ಆಮಿಶಗಳನ್ನು ಒಡ್ಡಿ, ತಮ್ಮತ್ತ ಸೆಳೆಯುತ್ತವೆ. ಹೆಚ್ಚಿನ ಬಡ್ಡಿಯ ಆಸೆ ತೋರಿಸಿ ಠೇವಣಿ ಮಾಡಲು ಪ್ರೇರೇಪಿಸಿ, ತದನಂತರ ಹೇರಳವಾಗಿ ಹಣ ಸಂಗ್ರಹವ...

ಆ ಮಗುವಿನ ಮನಸು

 ಆ ಮಗುವಿನ ಮನಸು  ಇಂದು ಕೌಟುಂಬಿಕ ನ್ಯಾಯಾಲಯದಲ್ಲಿ ನನ್ನ ಕಕ್ಷಿದಾರರೊಬ್ಬರ ವಿವಾಹ ವಿಚ್ಛೇದನ ಪ್ರಕರಣ ಇತ್ಯರ್ಥಕ್ಕಾಗಿ ಇತ್ತು. ನನ್ನ ಕಕ್ಷಿದಾರಳು ತನ್ನ ತಾಯಿಯ ನೋಡಿಕೊಳ್ಳಲು ಪದೇ ಪದೇ ತವರಿಗೆ ಮರಳುತ್ತಿದ್ದುದು ಮತ್ತು ಪತಿಯ ಮನೆಯಲ್ಲಿ ನೀರನ್ನು ಅತಿಯಾಗಿ ಬಳಸುವುದಕ್ಕೆ ನಿರ್ಬಂಧ ಮತ್ತು ಅತ್ತೆ-ಮಾವಂದಿರ ಸಣ್ಣ-ಪುಟ್ಟ ಕಿರುಕುಳ, ಪರಸ್ಪರರ ಹಠ, ಒರಟು-ಕಹಿ ಮಾತುಗಳಿಂದ ಸಂಬAಧ ಬಿಗಡಾಯಿಸಿ ಅವಳ ವೈವಾಹಿಕ ಜೀವನ ವಿಚ್ಛೇದನಕ್ಕೆ ಬಂದು ನಿಂತಿತ್ತು. ಒಂದು ಸಮಾಧಾನದ ಸಂಗತಿಯೆAದರೆ, ಮದುವೆಯಾಗಿ ಕೆಲ ದಿನ ಮಾತ್ರ ಗಂಡನ ಮನೆಯಲ್ಲಿ ವಾಸಿಸಿದ್ದು ಅವಳಿಗೆ ಮಕ್ಕಳಾಗಿಲ್ಲ. ಎಷ್ಟೇ ಪ್ರಯತ್ನಿಸಿದರೂ ಹೊಂದಾಣಿಕೆಯಾಗದ ಕಾರಣ ಕೊನೆಗೆ ಪರಸ್ಪರ ಒಪ್ಪಂದದ ಮೇರೆಗೆ ವಿಚ್ಛೇದನೆಯಾಯಿತು. ಆದರೆ ಇದಕ್ಕಿಂತ ಬೇರೊಬ್ಬರ ವಿಚ್ಛೇದನೆ ಪ್ರಕರಣವು ಅಲ್ಲಿ ನಡೆಯಿತು. ಒಂದು ಪ್ರಕರಣದಲ್ಲಿ ಸತಿ-ಪತಿ ಇಬ್ಬರೂ ಬೇರೆ-ಬೇರೆ ಕಡೆಗೆ ಸರ್ಕಾರಿ ಸೇವೆಯಲ್ಲಿ ನಿವೃತ್ತಿ ಹಂತಕ್ಕೆ ಬಂದವರು. ಅವರ ಮಗ ಇಂಜಿನೀಯರಿAಗ ವ್ಯಾಸಂಗ ಮುಗಿಸಿದ್ದಾನೆ. ಆದರೆ ತಂದೆ-ತಾಯಿಯರು ತಮ್ಮ ಸಂಬಳವನ್ನು ಮಗನಿಗಾಗಿ ವ್ಯಯಿಸುವುದಕ್ಕೆ ತಯಾರಿಲ್ಲ. ಇಬ್ಬರೂ ನೀನು ಕೊಡು, ನೀನು ಕೊಡು ಎಂದು ನ್ಯಾಯಾಲಯದ ಕಟ್ಟೆ ಹತ್ತಿದ್ದಾರೆ. ಇಬ್ಬರ ವಿವಾದಕ್ಕೆ ಬೆಳೆದು ನಿಂತ ಮಗನೇ ಮೂಕ ಸಾಕ್ಷಿ. ಇನ್ನೊಂದು ಪ್ರಕರಣದÀಲ್ಲಿ ನನ್ನ ಕಕ್ಷಿದಾರಳಂತೆ ಸತಿ-ಪತಿ ಇಬ್ಬರೂ ಯುವ ವಯಸ್ಸಿನವರಾಗಿದ್ದು ಅದರಲ್ಲೂ...

ನಾ ಹೀಂಗ ಹೇಳಾಂವ.., ನೀವ್ ಇನ್ನೂ ಹೀಂಗ ಇರಾವ್ರ ಏನ್ ?

 ನಾ ಹೀಂಗ ಹೇಳಾಂವ.., ನೀವ್ ಇನ್ನೂ ಹೀಂಗ ಇರಾವ್ರ ಏನ್ ?  "ಅನ್ಯಾಯ, ಅವ್ಯವಹಾರ, ಅಕ್ರಮ, ಭ್ರಷ್ಟಾಚಾರ, ಹಗರಣ" ಅಂತ್ ಈ ಹುಚ್ಚ ಮಂದ್ಯಾಕ್ ಹೋಯ್ಕೊಂಡ ಸಾಯ್ತಾರೋ ತಿಳೀನವಾತ. ಅಲ್ಲಾ.. ಇವ್ರಿಗೆ ಬ್ಯಾರೇ ಕೆಲ್ಸಾ ಬೊಗ್ಸಿ ಇಲ್ಲೇನ್? ಈ ರಾಜ್ಕೀಯ್ದಾವ್ರ ಕಷ್ಟ, ರಾಜ್ಕಾರ್ಣಿಗೋಳ ಗೋಳ ಯಾಂವಾರ ಮಗಗ ತಿಳೀತೆತೇನ? ಹೀಂಗಅ ಮಾತೀಗೆ ಬಂದ ಹೇಳಾಕತ್ತೇನ್ನಿ, ತಪ್ಪ ತಿಳಕೋಬ್ಯಾಡಾ ಮತ್ತ.. ಮೊನ್ನಿ ದೊಡ್ಡ ಹೊಟೇಲ್ನಾö್ಯಗ್ ದೋಸ್ತಿ ಖಾತೆದಾಗ ಒಬ್ಬ ರಾಜಕೀಯದಾಗ ಇರೋ ಪುಣ್ಯಾತ್ಮರೊಬ್ರ‍್ನ ಕೇಳ್ನಿ "ನೀವೂ ಯಾವ್ದಾರ 'ಕಜಿಬಿಜಿ' ಪಕ್ಷದಾಗ ಟಿಕೇಟ್ಟಿಗೆ ಟ್ರೆöÊ ಮಾಡ್ರö್ಯಲ್ಲಾ" ಅಂತ. ಅಷ್ಟ ಕೇಳೀದ್ದ ತಡಾ, ಬಿಚ್ಚಿಟ್ರ ನೋಡ ಬ್ರಹ್ಮಾಂಡ...   ಅವರಂತಾರ, ಎಮ್ಮೆಲ್ಲೆ ಎಲೆಕ್ಷನ್ ಅಂದ್ರ ಏನ ತಿಳಕೊಂಡೀ ಹುಚ್ಚಪ್ಪಾ, ಕೊಂಡವಾಡದಾಗ ಎಮ್ಮಿ ಖ್ವಾನಾ ಕೊಂಡಕೊAಡAಗ ಅಂತ ತಿಳಕೊಂಡೀ ಏನ? ಕಮ್ಮೀತ ಕಮ್ಮೀ (ಲೆಕ್ಕಾ ಹಾಕಿ ಹೇಳ್ದ) ಅಂದ್ರೂ 25 ಕೋಟಿ ರೂಪಾಯಿ ಬೇಕಾಕ್ಯಾವ ಅಂದ್ರು. ಆಗ ನಾ ಅವರಿಗೆ ಸಮಾಧಾನ ಆಗ್ಲಿ ಅಂತ ಅನ್ನೀ.. 'ಅಲ್ಲಾ, ಸುಮ್ಮನ ಟಿಕೇಟ ತಗೊಂಡ ಪಾರ್ಟಿ ಫಂಡ ಹೊಡ್ಕೊಂಡ ಗಪ್ಪ ಮನ್ಯಾಗ ಕುಂತರ ಹೇಂಗ್ಯ' ಅನ್ನಿ. ಆಗ ಆ ಮನಶ್ಯಾ ಮತ್ತಷ್ಟ ಘರಂ ಆಗಿ 'ಪಾರ್ಟ್ಯಾವ್ರ ಏನ ಏಳರಾಗ ಹುಟ್ಯಾರಂತ ತಿಳಖೊಂಡಿ ಏನ? ಅವ್ರು ಸುಮ್ಮನ ರೀಕಾಮಿ ಮನಶ್ಯಾಗ 1 ಕೋಟಿ ರೂಪಾಯಿ ಕೊಟ್ಟ ಮಲಕೊಂಡಬಿಡೋಲ್ಲ. ಫಂಡ ಕೋಡೋ ಮದ್ಲ ನ...

"ಭಾರತ ಕೇ ವೀರ್" ನಂತೆ "ಭಾರತ ಕೇ ಕಿಸಾನ್" ಎಂಬ ಕಲ್ಯಾಣ ನಿಧಿ ಸ್ಥಾಪಿಸಿ

 "ಭಾರತ ಕೇ ವೀರ್" ನಂತೆ "ಭಾರತ ಕೇ ಕಿಸಾನ್" ಎಂಬ ಕಲ್ಯಾಣ ನಿಧಿ ಸ್ಥಾಪಿಸಿ 1965ರಲ್ಲಿ ದೇಶದ ಎರಡನೇ ಪ್ರಧಾನಿ ದಿವಂಗತ ಶ್ರೀ.ಲಾಲ ಬಹಾದ್ದೂರ ಶಾಸ್ತಿçÃಜಿಯವರು " ಜೈಜವಾನ್ ಜೈಕಿಸಾನ್ " ಎಂಬ ಘೋಷಣೆಯನ್ನು ದೆಹಲಿಯ ರಾಮಲೀಲಾ ಮೈದಾನದಲ್ಲಿ ಮಾಡಿದ್ದರು. ಹಸಿರು ಕ್ರಾಂತಿಯ ಹರಿಕಾರರಾದ ಶಾಸ್ತಿçÃಜಿಯವರ ಈ ಘೋಷಣೆಯಾಗಿ ಇಂದಿಗೆ 55 ವರ್ಷಗಳೇ ಕಳೆದಿದ್ದರೂ ರೈತರ ಬದುಕು ಗೋಳಿನಿಂದ ಮುಕ್ತಿಯಾಗಿಲ್ಲ. " ಜೈಜವಾನ್ ಜೈಕಿಸಾನ್ " ಘೋಷಣೆಯಲ್ಲಿ 'ಯೋಧರ' ನಂತರ ಉಚ್ಛರಿಸಿರುವ ಪದವೇ 'ರೈತರು'. ಎಂಬುದು ಗಮನಾರ್ಹ. ದೇಶದ ಗಡಿಯನ್ನು ಕಾಯಲು ಯೋಧರು ಹೇಗೆ ಬೇಕೋ ಅದೇ ರೀತಿ ದೇಶದ ಜನತೆಯ ಆಹಾರದ ಹಸಿವನ್ನು ನೀಗಿಸುವ ರೈತರೂ ಕೂಡ ಅಷ್ಟೇ ಮಹತ್ವ ಪಡೆದಿದ್ದಾರೆ. ಅದನ್ನರಿತೇ ಶಾಸ್ತಿçÃಜಿಯವರು ರೈತರ ಕಲ್ಯಾಣಕ್ಕಾಗಿ ಕ್ರಾಂತಿಕಾರಿಕ ಕೃಷಿ ಯೋಜನೆಗಳನ್ನು ಜಾರಿಗೆ ತಂದರು. ಆದರೆ ಇಂದು ರೈತರ ಬದುಕು ಹಸನಾಗಿಸಲು ಹಲವಾರು ಸರ್ಕಾರಗಳು ಹಲವಾರು ಯೋಜನೆಗಳನ್ನು ಜಾರಿಗೆ ತರುತ್ತಿದ್ದರೂ ಅವು ಸಾಕಾಗುತ್ತಿಲ್ಲ ಅಥವಾ ಅವು ರೈತರಿಗೆ ತಲುಪುತ್ತಿಲ್ಲ ಎಂಬ ಅಳಲು ಸದಾ ಇದ್ದೇ ಇದೆ. ಒಂದೆಡೆ ದೇಶದ ಜನತೆಗೆ ಯಾವರೀತಿ ದೇಶದ ಸೈನಿಕರ ಬಗ್ಗೆ ಹೆಮ್ಮೆ, ಗೌರವ ಮತ್ತು ಅಭಿಮಾನವು ಇದೆಯೋ ಅದೇ ರೀತಿ ರೈತರ ಬಗ್ಗೆ ಕೂಡ ಅಭಿಮಾನ, ಕಳಕಳಿ ಮತ್ತು ಅನುಕಂಪಗಳು ಇದ್ದೇ ಇದೆ. ಇದನ್ನೇ ಗಮನದಲ್ಲಿಟ್ಟುಕೊಂಡು ಕೇಂದ್ರ ಸರ...

ಅಂಬೇಡ್ಕರ ಮತ್ತು ಪೂರ್ವಾಗ್ರಹಪೀಡಿತ ಸಮಾಜ

 ಅಂಬೇಡ್ಕರ ಮತ್ತು ಪೂರ್ವಾಗ್ರಹಪೀಡಿತ ಸಮಾಜ ಅಂಬೇಡ್ಕರ ಅವರು ಪ್ರತಿಪಾದಿಸಿದ ಜೀವನ ಮೌಲ್ಯಗಳನ್ನು 'ಅಂಬೇಡ್ಕರ ಓದು'ವ ಮೂಲಕ  ಅವರ ಜಯಂತಿಯನ್ನು ಆಚರಿಸಬೇಕಾಗಿದೆ.  ಯಾರಾದರೂ ಡಾ.ಬಾಬಾಸಾಹೇಬ ಭೀಮರಾವ ಅಂಬೇಡ್ಕರ ಅವರ ಬಗೆಗೆ ಮಾತನಾಡಿದರೆ ಅಥವಾ ಲೇಖನ ಬರೆದರೆ, ಆ ವ್ಯಕ್ತಿ ಬಹುಷಃ ತಳ ಸಮುದಾಯಕ್ಕೆ ಸೇರಿದವನಾಗಿರಬಹುದು ಎಂಬ ಪೂರ್ವಾಗ್ರಹಪೀಡಿತ ಸಮಾಜದಲ್ಲಿ ನಾವು ಇರುವುದು ಎಂದು ಹೇಳಲು ವಿಷಾದವೆನಿಸುತ್ತದೆ. ಇದು ಇಂದಿನ ಜನಸಮುದಾಯ ಅಂಬೇಡ್ಕರ ಅವರನ್ನು ಎಷ್ಟರಮಟ್ಟಿಗೆ ತಿಳಿದುಕೊಂಡಿದೆ ಎಂಬುದನ್ನು ತೋರಿಸುಕೊಡುತ್ತದೆ ಅಷ್ಟೇ. ಯಾವ ವ್ಯಕ್ತಿ ಸಮಾನತೆಯನ್ನೇ ತನ್ನ ಕನಸನ್ನಾಗಿಸಿಕೊಂಡು, ಮಾನವೀಯತೆಯನ್ನೇ ತನ್ನ ಗುರಿಯಾಗಿಸಿಕೊಂಡು, ಜೀವಮಾನವಿಡೀ ಸಂಘರ್ಷವನ್ನೇ ತನ್ನ ಉಸಿರಾಗಿಸಿಕೊಂಡನೋ ಆ ವ್ಯಕ್ತಿ ಇಂದು ಕೇವಲ ಒಂದು ಸಮುದಾಯದ ಐಕಾನ್ ಆಗಿ ಉಳಿದಿರುವುದು ನಮ್ಮ ದುರಾದೃಷ್ಟವೇ ಸರಿ.  ಬಾಬಾಸಾಹೇಬರ ಬದುಕನ್ನು ಅರಿಯಲು ಸಣ್ಣ ಪ್ರಯತ್ನವನ್ನು ಕೂಡ ಇಂದಿನ ಸಮಾಜ ಮಾಡುತ್ತಿಲ್ಲ. ಅಂಬೇಡ್ಕರ ಅಂದರೆ ಕೇವಲ ಸಂವಿಧಾನ ಶಿಲ್ಪಿ, ಹಲವಾರು ಪದವಿಗಳನ್ನು ಪಡೆದವರು, ಸ್ವಾತಂತ್ರö್ಯಕ್ಕಾಗಿ ಹೋರಾಡಿದವರು, ದಲಿತರ ನಾಯಕ ಇತ್ಯಾದಿಗಳ ವರ್ಣನೆಗಳನ್ನು ಮಾತ್ರ ನಾವು ಕೇಳಪಡುತ್ತೇವೆ. ಆದರೆ ಅಂಬೇಡ್ಕರ ಅವರು ಯಾವ ತೆರನಾದ ಸಾಮಾಜಿಕ ವ್ಯವಸ್ಥೆಯಲ್ಲಿ ಜನ್ಮತಳೆದರು, ಅಂದಿನ ಕಟ್ಟುಪಾಡುಗಳೇನು, ಸ್ವಾಭಿಮಾನ ಮತ್ತು ಆತ್ಮಗೌರವಗಳನ್ನು ಬಲಿಕೊಡದೇ...

ಮಾಹಿತಿ ಹಕ್ಕಿನ ಮಹತ್ವ

 ಮಾಹಿತಿ ಹಕ್ಕಿನ ಮಹತ್ವ   ವಿರ‍್ಶೆ ಎಂಬುದು ವಿರ‍್ಶಕನ ದೃಷ್ಟಿಯಲ್ಲಿ ಕಾಣುವ ಪುಸ್ತಕದ ಗುಣ-ಅವಗುಣಗಳನ್ನು ಯಾವುದೇ ಮುಲಾಜು ಇಲ್ಲದೇ ಪಟ್ಟಿ ಮಾಡಿ ಅದಕ್ಕೆ ತಮ್ಮದೇ ಆದ ಪ್ರಮಾಣಪತ್ರ ಕೊಡುವುದು. ಆದರೆ ಆ ವಿರ‍್ಶೆ ಎಷ್ಟರ ಮಟ್ಟಿಗೆ ಸರಿ ಎನ್ನುವ ಪ್ರಶ್ನೆ ಬಂದಾಗ ಆ ವಿರ‍್ಶೆಯನ್ನು ಇನ್ನೊಬ್ಬರು ವಿರ‍್ಶೆ ಮಾಡಬೇಕಾಗುತ್ತದೆ ಅಲ್ಲವೇ? ಈ ವಿರ‍್ಶೆ ಅಥವಾ ಮರುವಿರ‍್ಶೆ ಲೇಖಕರಿಗೆ ಸಿಹಿ ಅಥವಾ ಕಹಿ ಅನುಭವ ಅಥವಾ ಸಮಿಶ್ರ ಅನುಭವ ಕೊಡುವಂಥದ್ದು. ಆದ್ದರಿಂದ ವಿರ‍್ಶೆ ಎಂಬುದು ಬಹಳ ದೊಡ್ಡ ಹೊಣೆಗಾರಿಕೆ. ಅದನ್ನು ಬರೆಯುವವರಿಗೂ ಓದುವವರಿಗೂ ಎದೆಗಾರಿಕೆ ಬೇಕು. ವಿರ‍್ಶೆ ಪ್ರಾಮಾಣಿಕವಾಗಿಲ್ಲದೇ ಹೋದರೆ ಕೇವಲ ಲೇಖಕರನ್ನು ಸಂಪ್ರೀತಗೊಳಿಸಲು ಪುಸ್ತಕದ ಕುರಿತು ಮೆಚ್ಚುಗೆ ವ್ಯಕ್ತಪಡಿಸುತ್ತಾ ಹೋದರೆ ಅದು ವಿರ‍್ಶೆಯಾಗದೇ ಕೇವಲ ಪ್ರಶಂಸೆ ಅಥವಾ ಮುಖಸ್ತುತಿ ಆಗುತ್ತದೆ.  ಇನ್ನು ನೇರವಾಗಿ ‘ಮಾಹಿತಿ ಹಕ್ಕಿನ ಮಹತ್ವ’ ಎಂಬ ಪುಸ್ತಕದ ಕುರಿತು ಹೇಳಬೇಕೆಂದರೆ, ಇದು ಸಂವಿಧಾನದಿಂದ ಬಳುವಳಿಯಾಗಿ ಬಂದ ಮೂಲಭೂತ ಹಕ್ಕುಗಳನ್ನು ಜಾರಿಗೆ ತರಲು ಪ್ರಜೆಗೆ ಬೇಕಾಗುವ ಆವಶ್ಯಕ ಮಾಹಿತಿಯನ್ನು ಪಡೆಯಲು ಇರುವ ರಹದಾರಿ ಎನ್ನಬಹುದು. ಈ ಮಹತ್ವದ ಮಾಹಿತಿ ಹಕ್ಕು ಕಾಯ್ದೆಯಲ್ಲಿ ಅಡಕವಾಗಿರುವ ರಾಜಮರ‍್ಗದ ಕುರಿತು ವಿವರಿಸುವಲ್ಲಿ ಸುಳಕೂಡೆ ಸರ್ ಅವರು ಸಂಪರ‍್ಣ ಯಶಸ್ವಿಯಾಗಿದ್ದಾರೆ. ಕಾನೂನು ಪಂಡಿತರು ಮಾಡಬೇಕಾದ ಮಹತ್ಕರ‍್ಯವನ್ನು ಒಬ್ಬ ಸಾಹಿತಿಯಾಗಿದ್...

ಉಪ-ನೋಂದಣಾಧಿಕಾರಿಗಳ ಕಛೇರಿಗಳಲ್ಲಿಯ ಭ್ರಷ್ಟಾಚಾರ ತಡೆಯುವ ಕುರಿತು

 ಇವರಿಗೆ- ಶ್ರೀಯುತ ಹೆಚ್.ಡಿ.ಕುಮಾರಸ್ವಾಮಿಯವರು ಸನ್ಮಾನ್ಯ ಮುಖ್ಯಮಂತ್ರಿಗಳು, ಕರ್ನಾಟಕ ಸರ್ಕಾರ, ಕೊಠಡಿ ಸಂಖ್ಯೆ 235, 2ನೇ ಮಹಡಿ, ವಿಧಾನ ಸೌಧ, ಬೆಂಗಳೂರು, ಕರ್ನಾಟಕ.    ವಿಷಯ-ಉಪ-ನೋಂದಣಾಧಿಕಾರಿಗಳ ಕಛೇರಿಗಳಲ್ಲಿಯ ಭ್ರಷ್ಟಾಚಾರ ತಡೆಯುವ ಕುರಿತು,  ರಾಜ್ಯದ ಅಭಿವೃದ್ಧಿಗಾಗಿ ಹಾಗೂ ಜನಸಾಮಾನ್ಯರ ಏಳ್ಗೆಗಾಗಿ ಅವಿರತವಾಗಿ ಶ್ರಮಿಸುತ್ತಿರುವ ಗೌರವಾನ್ವಿತ ಮುಖ್ಯಮಂತ್ರಿಗಳಿಗೆ ಧನ್ಯವಾದಗಳನ್ನು ಸಲ್ಲಿಸುತ್ತ, ಬೆಳಗಾವಿ ನ್ಯಾಯವಾದಿಗಳ ಪರವಾಗಿ ನಿವೇದಿಸುವುದೇನೆಂದರೆ,  ಆಧುನಿಕ ವಿಜ್ಞಾನ-ಮಾಹಿತಿ ತಂತ್ರಜ್ಞಾನ ಎಷ್ಟೇ ಮುಂದುವರಿದರೂ, ಪಾರದರ್ಶಕತೆಗಾಗಿ ಸರ್ಕಾರ ಎಷ್ಞೇ ಕಠಿಣ ಕಾನೂನುಗಳನ್ನು ಮಾಡಿದರೂ ಬ್ರಷ್ಟಾಚಾರ ಕಡಿಮೆಯಾಗುವ ಲಕ್ಷಣಗಳು ಕಾಣುತ್ತಿಲ್ಲ. ಕಂದಾಯ ಇಲಾಖೆಗಳು ಅದರಲ್ಲೂ ಮುಖ್ಯವಾಗಿ ಉಪ-ನೋಂದಣಾಧಿಕಾರಿ ಕಛೇರಿ ಇದಕ್ಕೆ ಹೇಳಿ ಮಾಡಿಸಿದಂತಿವೆ. ಇಲ್ಲಿ ಜನರಿಗೆ ಕಿರುಕುಳವಾಗದಿರಲೆಂದು ಸಿಸಿ ಟಿವಿ ಕ್ಯಾಮರಾಗಳಿವೆ. ತಕ್ಷಣ ದೂರು ಸಲ್ಲಿಸಲು ಲೋಕಾಯುಕ್ತ ಕಛೇರಿಯ ದೂರವಾಣಿ ಸಂಖೆಯನ್ನೊಳಗೊAಡ ದೊಡ್ಡ ಫಲಕ ಇವೆ. ಎಲ್ಲವೂ ಪಾರದರ್ಶಕವಾಗಿ ನಡೆಯುವ ಸಲುವಾಗಿ ಕಂಪ್ಯೂಟರಗಳಿವೆ. ಸರ್ಕಾರದ ವೆಬ್‌ಸೈಟಿನಲ್ಲಿ ದಸ್ತಾವೇಜು ನೋಂದಣಿಗೆ ಬೇಕಾದ ಸಮಗ್ರ ಮಾಹಿತಿ ಆನ್‌ಲೈನಿನಲ್ಲಿ ಲಭ್ಯವಿದೆ. ಆದರೂ ಬ್ರಷ್ಟಾಚಾರ ಮಾತ್ರ ನಿಂತಿಲ್ಲ.   ಜನರಿಗೆ ಕಾನೂನಿನ ತಿಳುವಳಿಕೆ ಇಲ್ಲದಿರುವುದು ಮತ್ತು ಆತುರದಲ್ಲಿ ತ...

ಸಬ್-ರಿಜಿಸ್ಟಾçರ್‌ಗಳಿಗೆ ನೋಂದಣಿ ನಿರಾಕರಿಸುವ ಅಧಿಕಾರ ಇಲ್ಲ

 ಸಬ್-ರಿಜಿಸ್ಟಾçರ್‌ಗಳಿಗೆ ನೋಂದಣಿ ನಿರಾಕರಿಸುವ ಅಧಿಕಾರ ಇಲ್ಲ  ಆಧುನಿಕ ವಿಜ್ಞಾನ-ಮಾಹಿತಿ ತಂತ್ರಜ್ಞಾನ ಎಷ್ಟೇ ಮುಂದುವರಿದರೂ, ಪಾರದರ್ಶಕತೆಗಾಗಿ ಎಷ್ಞೇ ಕಠಿಣ ಕಾನೂನುಗಳನ್ನು ಮಾಡಿದರೂ ಬ್ರಷ್ಟಾಚಾರ ಕಡಿಮೆಯಾಗುವ ಲಕ್ಷಣಗಳು ಕಾಣುತ್ತಿಲ್ಲ. ಕಂದಾಯ ಇಲಾಖೆಗಳು ಅದರಲ್ಲೂ ಮುಖ್ಯವಾಗಿ ಉಪ-ನೋಂದಣಾಧಿಕಾರಿ ಕಛೇರಿ ಇದಕ್ಕೆ ಹೇಳಿ ಮಾಡಿಸಿದಂತಿವೆ. ಇಲ್ಲಿ ಜನರಿಗೆ ಕಿರುಕುಳವಾಗದಿರಲೆಂದು ಸಿಸಿ ಟಿವಿ ಕ್ಯಾಮರಾಗಳಿವೆ. ತಕ್ಷಣ ದೂರು ಸಲ್ಲಿಸಲು ಲೋಕಾಯುಕ್ತ ಕಛೇರಿಯ ದೂರವಾಣಿ ಸಂಖೆಯನ್ನೊಳಗೊAಡ ದೊಡ್ಡ ಫಲಕ ಇವೆ. ಎಲ್ಲವೂ ಪಾರದರ್ಶಕವಾಗಿ ನಡೆಯುವ ಸಲುವಾಗಿ ಕಂಪ್ಯೂಟರಗಳಿವೆ. ಸರ್ಕಾರದ ವೆಬ್‌ಸೈಟಿನಲ್ಲಿ ದಸ್ತಾವೇಜು ನೋಂದಣಿಗೆ ಬೇಕಾದ ಸಮಗ್ರ ಮಾಹಿತಿ ಆನ್‌ಲೈನಿನಲ್ಲಿ ಲಭ್ಯವಿದೆ. ಆದರೂ ಬ್ರಷ್ಟಾಚಾರ ಮಾತ್ರ ನಿಂತಿಲ್ಲ.   ಜನರಿಗೆ ಕಾನೂನಿನ ತಿಳುವಳಿಕೆ ಇಲ್ಲದಿರುವುದು ಮತ್ತು ಆತುರದಲ್ಲಿ ತ್ವರಿತವಾಗಿ ತಮ್ಮ ಕೆಲಸವಾಗಬೇಕೆಂದು ಬಯಸುವುದು ಇದಕ್ಕೆ ಮುಖ್ಯ ಕಾರಣ. ಯಾವುದೇ ವ್ಯವಹಾರಕ್ಕೆ ಸಂಬAಧಿಸಿದAತೆ ಕರಾರು ಅಧಿನಿಯಮ, ಸ್ವತ್ತು ಹಸ್ತಾಂತರ ಅಧಿನಿಯಮ, ಕಂದಾಯ ಕಾಯ್ದೆ, ನೋಂದಣಿ ಕಾಯ್ದೆ, ಮುದ್ರಾಂಕ ಕಾಯ್ದೆ, ಸಾಕ್ಷಿ ಅಧಿನಿಯಮ ಮತ್ತು ವಾರಸಾ ಅಧಿನಿಯಮ ಹಾಗೂ ಇನ್ನೂ ಹಲವಾರು ಕಾಯ್ದೆಗಳು ಪಾತ್ರವಹಿಸುತ್ತವೆ. ಆದರೆ ಇವುಗಳ ಪರಿಜ್ಞಾನ ಇಲ್ಲದ ಏಜೆಂಟರು, ಬಾಂಡರೈಟರಗಳ ಮೂಲಕ ಜನರು ನೋಂದಣಿ ಮಾಡಿಸಿಕೊಳ್ಳುತ್ತಿರುವುದು ತೊಂದರ...

ಭಾಷಾ ನೀತಿಯೋ? ಭಾಷಾ ಭೀತಿಯೋ?

 ಭಾಷಾ ನೀತಿಯೋ? ಭಾಷಾ ಭೀತಿಯೋ?    ಭಾಷಾನೀತಿಯ ಮೇಲೆ ಸರ್ವೋಚ್ಛ ನ್ಯಾಯಾಲಯದ 5 ನ್ಯಾಯಮೂರ್ತಿಗಳÀ ಸಾಂವಿಧಾನಿಕ ಪೀಠ ಮೇ 6ರಂದು ನೀಡಿದ ತೀರ್ಪನ್ನು ಮಾತೃಭಾಷೆಗೆ ಮರಣ ಶಾಸನವೆಂದೇ ಬಿಂಬಿಸಲಾಗುತ್ತಿದೆ. ಈ ತೀರ್ಪಿನ ಪ್ರಮುಖ ಅಂಶಗಳೆAದರೆ, ತಮ್ಮ ಮಕ್ಕಳಿಗೆ ಯಾವ ಭಾಷೆಯಲ್ಲಿ ಶಿಕ್ಷಣ ನೀಡಬೇಕೆಂಬುದನ್ನು ತೀರ್ಮಾನಿಸಬೇಕಾದವರು ಪಾಲಕರು, ಪೋಷಕರು. ಭಾಷಾವಾರು, ಧಾರ್ಮಿಕ ಅಲ್ಪಸಂಖ್ಯಾತ ಸಮುದಾಯ-ಸಂಸ್ಥೆಗಳಿಗೆ ಇರುವ ಸಂವಿಧಾನಿಕ ಹಕ್ಕುಗಳನ್ನು ಸರ್ಕಾರ ಕಸಿದುಕೊಳ್ಳಲು ಬರುವುದಿಲ್ಲ. ಅವರು ತಮ್ಮ ಸಂಸ್ಥೆಗಳ ಶಾಲೆಗಳಲ್ಲಿ ಯಾವ ಭಾಷೆಯಲ್ಲಿ ಶಿಕ್ಷಣ ನೀಡಬೇಕೆಂಬುದನ್ನು ತೀರ್ಮಾನಿಸಲು ಸ್ವತಂತ್ರರಾಗಿದ್ದಾರೆ. ಸರ್ಕಾರವು ಸರ್ಕಾರದ ಅಥವಾ ಸರ್ಕಾರದ ಅನುದಾನಿತ ಶಾಲೆಗಳಲ್ಲಿ ಮಾತ್ರ ಮಾತೃಭಾಷೆಯಲ್ಲಿ ಕಲಿಯ ಬಯಸುವ ವಿದ್ಯಾರ್ಥಿಗಳಿಗೆ ಮಾತೃಭಾಷೆಯಲ್ಲಿ ಶಿಕ್ಷಣ ನೀಡುವುದನ್ನು ಕಡ್ಡಾಯಗೊಳಿಸಬಹುದು. ಆದರೆ ಅನ್ಯಭಾಷಿಕರಿಗೆ ಮಾತೃಭಾಷೆಯನ್ನು 2ನೇ, 3ನೇ ಭಾಷೆಯಾಗಿ ಕಲಿಸಬಹುದು. ಇನ್ನು ಅನುದಾನರಹಿತ ಖಾಸಗಿ ಶಿಕ್ಷಣ ಸಂಸ್ಥೆಗಳು ತಮಗೆ ಬೇಕಾದ ಭಾಷೆಯಲ್ಲಿ ಶಿಕ್ಷಣ ನೀಡಬಹುದು.  ಮಾತೃಭಾಷೆಯಲ್ಲಿಯ ಶಿಕ್ಷಣ ಮತ್ತು ಆಂಗ್ಲಭಾಷೆಯಲ್ಲಿಯ ಶಿಕ್ಷಣಕ್ಕೆ ಅವುಗಳದ್ದೇ ಆದ ಅನುಕೂಲ ಮತ್ತು ಅನಾನುಕೂಲತೆ ಇವೆೆ. ಮಾತೃಭಾಷೆಯಲ್ಲಿಯ ಶಿಕ್ಷಣದ ಅನುಕೂಲಗಳು ಇಂತಿವೆ. ಅದು ಮಗುವಿಗೆ ಹಿತಕರ ವಾತಾವರಣ ಕಲ್ಪಿಸಿ, ಮಗುವಿನಲ್ಲಿ ಕಲಿಕಾ ಆಸಕ್ತಿ ಹೆಚ್ಚಿಸುತ...

ಅಗ್ಗದ ಪ್ರಚಾರಕ್ಕೆ ನಾಡು-ನುಡಿಯ ದುರ್ಬಳಕೆ

 ಅಗ್ಗದ ಪ್ರಚಾರಕ್ಕೆ ನಾಡು-ನುಡಿಯ ದುರ್ಬಳಕೆ  ಕನ್ನಡದ ಹಿರಿಮೆ ಗರಿಮೆಗಳನ್ನು ವರ್ಣಿಸಲು ಕ್ರಿ.ಶ.850ರಲ್ಲಿ ಅಮೋಘವರ್ಷ ನೃಪತುಂಗ ದೊರೆಯ ಕಾಲದ ಶ್ರೀವಿಜಯನ 'ಕವಿರಾಜಮಾರ್ಗ'ದಲ್ಲಿಯ 'ಕಾವೇರಿಯಿಂದಮಾ ಗೋದಾವರಿವರಮಿರ್ದ ನಾಡದಾ ಕನ್ನಡದೊಳ್' ಎಂಬ ಪದಗಳೇ ಸಾಕು. ಕನ್ನಡದಲ್ಲಿ ತನಗಿಂತ ಮೊದಲು ಆಗಿಹೋದ ಕವಿಗಳನ್ನು ಶ್ರೀವಿಜಯನು ವರ್ಣಿಸಿದ್ದಾನೆ. 'ಕುರಿತೋದದೆಯಂ ಕಾವ್ಯ ಪ್ರಯೋಗ ಪರಿಣಿತ ಮತಿಗಳ್ ಈ ಕನ್ನಡಿಗರ್' (ಯಾವುದನ್ನು ಕುರಿತು ಓದದ ಅವಿದ್ಯಾವಂತರು ಕಾವ್ಯ ಬರೆದು ಪ್ರಯೋಗ ಮಾಡುವಷ್ಟು ಬುದ್ಧಿವಂತರು ಈ ಕನ್ನಡಿಗರು) ಎಂದು ಅವನು ನುಡಿಯುತ್ತಾನೆ. ಕ್ರಿ.ಶ.450 ರಲ್ಲಿ ರಚಿತವಾದ ಕನ್ನಡದ ಮೊಟ್ಟಮೊದಲ ಶಾಸನ ಹಲ್ಮಿಡಿ ಶಾಸನ; ಕನ್ನಡದ ಬಗೆಗಿನ ಪ್ರಾಚೀನ ಬರಹ ದಾಖಲೆ ಎಂದರೆ ಕ್ರಿ.ಪೂ.230ರಲ್ಲಿಯ ಅಶೋಕನ ಬ್ರಹ್ಮಗಿರಿ ಶಾಸನ. ಶಂಭಾ ಜೋಷಿ, ಕಲಬುರ್ಗಿ, ಪಾಪು, ಕೆಟೆಲ್ ಮುಂತಾದ ಅನೇಕಾನೇಕ ಸಂಶೋಧಕರ ಕೃತಿಗಳು ಕನ್ನಡ ನಾಡಿನ ವಿಸ್ತಾರ, ಇತಿಹಾಸವನ್ನು ವಿವರಿಸುತ್ತಿವೆ. ಕನ್ನಡ 2000 ವರ್ಷ ಹಳೆಯದಷ್ಟೇ ಅಲ್ಲ, ಅದನ್ನು ನಾವು ಮಾತನಾಡಿದಂತೆ ಬರೆಯುವುದು, ಬರೆದಂತೆಯೇ ಓದಬಹುದಾಗಿದೆ. ಈ ವಿಶಿಷ್ಟತೆ ಹಲವಾರು ಭಾಷೆಗಳಿಗೆ ಇಲ್ಲ. ಇಂಗ್ಲೀಷ್‌ಗೆ ತನ್ನದೇ ಆದ ಲಿಪಿ ಇಲ್ಲ. ಅದು ರೋಮನ್ ಭಾಷೆ ಅವಂಬಿಸಿದೆ. ಹಿಂದಿಯನ್ನು ದೇವನಾಗರಿಯಲ್ಲಿ ಬರೆಯಲಾಗುತ್ತದೆ. ತಮಿಳು ತನ್ನದೇ ಲಿಪಿ ಹೊಂದಿದ್ದರೂ ತರ್ಕಬದ್ಧವಾಗಿಲ್ಲ. ಅದರ ಕೆಲವು...

ಕನ್ನಡ ಭಾಷೋತ್ಸವವಾಗಲಿ ನಮ್ಮ ರಾಜ್ಯೋತ್ಸವ

 ಕನ್ನಡ ಭಾಷೋತ್ಸವವಾಗಲಿ ನಮ್ಮ ರಾಜ್ಯೋತ್ಸವ ಸುಪ್ತವಾದ ಸಾಹಿತ್ಯನಿಧಿ ಪ್ರಚಲಿತಗೊಳುವ ಮೂಲಕ ಕನ್ನಡ ಚಿರಸ್ಥಾಯಿಯಾಗಲಿ   'ಕಾವೇರಿಯಿಂದಮಾ ಗೋದಾವರಿವರಮಿರ್ಪ ನಾಡದಾ ಕನ್ನಡದೊಳ್' (ಕಾವೇರಿಯಿಂದ ಗೋದಾವರಿ ನದಿಯವರೆಗೆ ಇರುವ ನಾಡು ಅದು ಕನ್ನಡ ನಾಡು) ಮತ್ತು 'ಚದುರರ್ ನಿಜದಿಂ ಕುರಿತೋದದೆಯುಂ ಕಾವ್ಯಪ್ರಯೋಗ ಪರಿಣತಮತಿಗಳ' (ಕನ್ನಡಿಗರು ಅಂದರೆ ಯಾವುದರ ಕುರಿತಾಗಿಯೂ ಕಾವ್ಯ ರಚಿಸುವಷ್ಟು ಪರಿಣಿತಿ ಹೊಂದಿದ ಚತುರರು) ಎಂದು ನೃಪತುಂಗ ದೊರೆಯ ಆಸ್ಥಾನ ಕವಿಯಾದ ಶ್ರೀವಿಜಯನು ತನ್ನ ಪ್ರಾಚೀನ ಗ್ರಂಥ 'ಕವಿರಾಜಮಾರ್ಗ'ದಲ್ಲಿ ಹೇಳಿದ್ದಾನೆ. ಕನ್ನಡ ನಾಡಿನ ವಿಸ್ತಾರ ಮತ್ತು ಕನ್ನಡಿಗರ ಕಾವ್ಯಪರಿಣಿತಿಯನ್ನು ವರ್ಣಿಸಲು ಇವೆರಡು ಸಾಲುಗಳು ಸಾಕು.   "ಮಹಾರಾಷ್ಟç ಬೇರೆ, ಕರ್ನಾಟಕ ಬೇರೆ ಅಲ್ಲ. ಎರಡಲ್ಲಿಯೂ ಒಂದೇ ರಕ್ತವು ಆಡುತ್ತಿದೆ; ಎರಡೂ ದೇಶಗಳ ಭಾಷೆಯು ಒಂದೇ ಅಂದರೆ ಕನ್ನಡವಿತ್ತು. ಭಾಷೆಯ ವಿಷಯದಲ್ಲಿ ಮಹಾರಾಷ್ಟçವು ಕುಲಗೆಟ್ಟು ಮರಾಠಿಯಾಗಿರುತ್ತದೆ." ಇವು ಲೋಕಮಾನ್ಯ ಟಿಳಕರು 26-11-1907ರಂದು ಗುರ್ಲಹೊಸೂರು ಗ್ರಾಮದಲ್ಲಿ ಮಾಡಿದ ಭಾಷಣದ ತುಣುಕುಗಳು. ಇವನ್ನು 1920ರಲ್ಲಿ ಪ್ರಕಟವಾದ ಕನ್ನಡದ ಏಕೀಕರಣದ ಮೊದಲ ಹೋರಾಟಗಾರರಾದ ಶ್ರೀ ಆಲೂರ ವೆಂಕಟರಾಯರು ತಮ್ಮ 'ಕರ್ನಾಟಕ-ಗತವೈಭವ' ಕೃತಿಯ ಮುನ್ನುಡಿಯಲ್ಲಿ ನಮೂದಿಸಿದ್ದಾರೆ.  ಇಂಥ ಉಚ್ಛಾçಯ ವೈಭವನ್ನು ಅನುಭವಿಸಿದ ಕನ್ನಡ ನಾಡು-ನುಡಿ ಹೇಗೆ ಸೀಮಿತಗೊ...

ಬಹುಮುಖ ವ್ಯಕ್ತಿತ್ವದ ಹೋರಾಟಗಾರ ಕೋ. ಚನ್ನಬಸಪ್ಪನವರು

 ಬಹುಮುಖ ವ್ಯಕ್ತಿತ್ವದ ಹೋರಾಟಗಾರ ಕೋ. ಚನ್ನಬಸಪ್ಪನವರು   ಕೋ.ಚೆ. ಎಂದೇ ಪ್ರಸಿದ್ಧರಾಗಿದ್ದ ಕೋ. ಚನ್ನಬಸಪ್ಪನವರು ನಿವೃತ್ತ ನ್ಯಾಯಮೂರ್ತಿಗಳು, ಸ್ವಾತಂತ್ರ‍್ಯ ಮತ್ತು ಏಕೀಕರಣ ಹೋರಾಟಗಾರರು, ಕನ್ನಡದ ಹಿರಿಯ ಬರಹಗಾರ ಆಗಿದ್ದರು. ಹೀಗೆ ವಿವಿಧ ಮುಖೀ ವ್ಯಕ್ತಿತ್ವದ ಕೋ. ಚೆನ್ನಬಸಪ್ಪನವರು ಫೆಬ್ರವರಿ 27, 1922ರಂದು ಬಳ್ಳಾರಿ ಜಿಲ್ಲೆಯ ಆಲೂರಿನ ಸಮೀಪದ ಕಾನಮಡುಗು ಎಂಬಲ್ಲಿ ಜನಿಸಿದರು. ತಂದೆ ವೀರಣ್ಣನವರು ಮತ್ತು ತಾಯಿ ಬಸಮ್ಮನವರು. ಕಾನಮಡುಗು ಮತ್ತು ಬಳ್ಳಾರಿಯಲ್ಲಿ ಶಾಲಾ ವಿದ್ಯಾಭ್ಯಾಸ ನಡೆಸಿದ ಚೆನ್ನಬಸಪ್ಪನವರು ಅನಂತಪುರದಲ್ಲಿ ಕಾಲೇಜು ವ್ಯಾಸಂಗ ನಡೆಸಿದರು. ವಿದ್ಯಾರ್ಥಿ ದೆಸೆಯಲ್ಲಿದ್ದಾಗ ಸ್ವಾತಂತ್ರ‍್ಯ ಚಳುವಳಿಗೆ ಧುಮುಕಿ, ‘ಬ್ರಿಟಿಷರೇ ಭಾರತ ಬಿಟ್ಟು ತೊಲಗಿ’ ಚಳುವಳಿಯಲ್ಲಿ ವಿದ್ಯಾರ್ಥಿ ಮುಖಂಡರಾಗಿ ಭಾಗವಹಿಸಿ ಸೆರೆಮನೆವಾಸ ಅನುಭವಿಸಿದರು. ಸೆರೆಮನೆಯಿಂದ ಹೊರಬಂದ ನಂತರದಲ್ಲಿ ಬಿ. ಎ ಪದವಿ ಪಡೆದರು. ನಂತರದಲ್ಲಿ ಕಾನೂನು ಪದವಿಯನ್ನೂ, ಚರಿತ್ರೆ ಮತ್ತು ರಾಜ್ಯಶಾಸ್ತ್ರಗಳಲ್ಲಿ ಸ್ನಾತಕೋತ್ತರ ಪದವಿಗಳನ್ನೂ ಪಡೆದರು.  1946ರ ವರ್ಷದಲ್ಲಿ ಮುಂಬೈ ಉಚ್ಛ ನ್ಯಾಯಾಲಯದಲ್ಲಿ ವಕೀಲರಾಗಿ ಕಾರ್ಯನಿರ್ವಹಿಸತೊಡಗಿದ ಚೆನ್ನಬಸಪ್ಪನವರು, 1965ರ ವರ್ಷದಲ್ಲಿ ಜಿಲ್ಲಾ ನ್ಯಾಯಾಧೀಶರಾಗಿ ನೇಮಕಗೊಂಡರು. ನಿವೃತ್ತಿಯ ನಂತರದಲ್ಲಿ ಕರ್ನಾಟಕ ಉಚ್ಛ ನ್ಯಾಯಾಲಯದಲ್ಲಿ ವಕೀಲಿ ವೃತ್ತಿ ನಡೆಸುವುದರ ಜೊತೆಗೆ ಹಲವಾರು ಸಂಘ ಸಂಸ್ಥೆಗಳಲ್ಲಿ ಸಮ...

ಕೋರೋಣಾ ಮತ್ತು ನ್ಯಾಯಾಂಗ

ಕೋರೋಣಾ ಮತ್ತು ನ್ಯಾಯಾಂಗ         ಕೋರೋಣಾ ಕಾರಣದಿಂದ ದೇಶಾದ್ಯಂತ ಲಾಕ್ ‌ ಡೌನ್ ‌ ಜಾರಿಯಾಗಿ ೫ ತಿಂಗಳುಗಳೇ ಕಳೆದಿವೆ . ಅದನ್ನು ಹಂತಹಂತವಾಗಿ ಅದನ್ನು ಸಡಿಲಿಸುತ್ತಾ ಬರಲಾಗಿದೆ . ಈಗ ವಾಸ್ತವದಲ್ಲಿ ಕೋರೋಣಾ ಸೋಂಕಿನ ಪ್ರಕರಣಗಳು ಮತ್ತು ಸಾವಿನ ಪ್ರಕರಣಗಳು ಹೆಚ್ಚುತ್ತಾ ಸಾಗಿದ್ದರೂ ಬಹತೇಕ ಜನ ಅದಕ್ಕೆ ಕ್ಯಾರೇ ಅನ್ನದೇ ನಿರ್ಭೀತಿಯಿಂದ ಅಡ್ಡಾಡುತ್ತಿದ್ದಾರೆ . ಕಣ್ಣ ಮುಂದೆ ಹಲವಾರು ಜನ ಸೋಂಕಿತರಾಗುತ್ತಿದ್ದರೂ ಕೆಲವರು ಸಾಯುತ್ತಿದ್ದರೂ ಅದು ಒಟ್ಟು ಜನಜೀವನದ ಮೇಲೆ ಯಾವುದೇ ಗಂಭೀರ ಪರಿಣಾಮ ಉಂಟು ಮಾಡುತ್ತಿಲ್ಲ. ಕೆಲವೇ ಕೆಲವು ಜನ ಹೆದರಿದವರು ಮನೆಯಲ್ಲಿ ಉಳಿಯುತ್ತಿದ್ದಾರೆ. ಕೋರೋಣಾ ಎಂಬುದು ಕೇವಲ ಮಾಧ್ಯಮದಲ್ಲಿ ಮತ್ತು ಸರ್ಕಾರಿ ಪ್ರಕಟಣೆಗಳಿಗೆ ಮಾತ್ರ ಸೀಮಿತ ಎಂಬುವಂತಾಗಿ, ನಿಜವಾಗಿ ಕೋರೋಣಾ ಎಂಬುದು ಇದೆಯೋ ಇಲ್ಲವೋ ಎಂಬ ಶಂಕೆ ಕೂಡ ಉಂಟಾಗಿದೆ. ಅದಕ್ಕೆ ಪೂರಕ ಎಂದೆನಿಸುವ ಹಲವಾರು ವಿಡಿಯೋಗಳು ಲೇಖನಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.              ವಸ್ತುಸ್ಥಿತಿ ಹೀಗಿರುವಾಗ ನಮ್ಮ ವ್ಯವಸ್ಥೆಯ ನಾಲ್ಕು ಆಧಾರಸ್ಥಂಬಗಳಲ್ಲಿ ಕಾರ್ಯಾಂಗ, ಶಾಸಕಾಂಗ ಮತ್ತು ಪತ್ರಿಕಾರಂಗಗಳು ನಿರ್ಭೀತಿಯಿಂದ ಕಾರ್ಯ ನಿರ್ವಹಿಸುತ್ತಿವೆ. ಅದರೆ ಪ್ರಮುಖ ಆಧಾರಸ್ಥಂಬವಾದ ನ್ಯಾಯಾಂಗವು ಮಾತ...

ಸುವರ್ಣಸೌಧಕ್ಕೆ ಸ್ವಾರ್ಥದ ಅಪಸ್ವರ

 ಸುವರ್ಣಸೌಧಕ್ಕೆ ಸ್ವಾರ್ಥದ ಅಪಸ್ವರ ---------------------  ಬೆಳಗಾವಿ ಭಾಗಕ್ಕೆ ಅಭಿವೃದ್ಧಿ ದೃಷ್ಟಿಯಿಂದ ಆಗಿರುವ ಅನ್ಯಾಯವನ್ನು ಸರಿಪಡಿಸಲೆಂದೇ ಬಹುದಿನಗಳ ನಂತರ ನಿರ್ಮಾಣವಾಗುತ್ತಿರುವ ಸುವರ್ಣಸೌಧದ ಅಡಿಗಲ್ಲಿಗೆ ಕೆಲವರು ತಮ್ಮ ಸ್ವಾರ್ಥಕ್ಕಾಗಿ ಪರಿಸರದ ಹೆಸರಿನಲ್ಲಿ ಅಡ್ಡಗಾಲು ಹಾಕಲು ಯತ್ನಿಸುತ್ತಿದ್ದಾರೆ. ಸಾವಿರಾರು ವರ್ಷಗಳಿಂದ ಇರುವಂಥ ಮರಗಳನ್ನು ಕಡಿದು ನಾಶಮಾಡುತ್ತಾರೆ ಎಂದು ಹಲವರ ಅನಿಸಿಕೆ. ಆದರೆ ವ್ಯಾಕ್ಸಿನ್ ಡಿಪೋದಲ್ಲಿ ನಿಜವಾಗಿ ಒಮ್ಮೆ ಅಡ್ಡಾಡಿ ನೋಡಿದರೆ ವಾಸ್ತವದ ಅರಿವಾಗುತ್ತದೆ. ಅಂಥ ವಯಸ್ಸಾದ ಮರಗಳು ಮಳೆಗಾಳಿಗೆ ತಂತಾವೇ ನೆಲಕ್ಕುರುಳಿತ್ತಿದ್ದು ಅವನ್ನು ಕಡೆಯಲೇ ಬೇಕು. ಇಲ್ಲದಿದ್ದರೆ ಜೀವಹಾನಿ ತಪ್ಪಿದ್ದಲ್ಲ. ಹಾಗೆ ನೋಡಿದರೆ ಅಲ್ಲಿ ನಿಜವಾಗಿ ಹಳೆಯ ಮರಗಳು ಹೇರಳವಾಗಿಲ್ಲ. ಹೆಚ್ಚಿನ ಮರಗಳನ್ನು ಕಾನೂನುಬಾಹೀರವಾಗಿ ಕಡೆದು ಸಾಗಿಸಲಾಗಿದೆ ಮತ್ತು ಸಾಗಿಸಲಾಗುತ್ತಿದೆ. ಅದೇ ರೀತಿ ಅನೈತಿಕ ಚಟುವಟಿಕೆಗಳಿಗೆ ಅದು ತಂಗುದಾಣವಾಗಿದೆ.   ವ್ಯಾಕ್ಸಿನ್ ಡಿಪೋದ ಸುತ್ತಮುತ್ತ ಅನಧಿಕೃತ ಕಟ್ಟಡಗಳು ಮತ್ತು ಒತ್ತುವರಿ ಮಾಡಿ ಕಟ್ಟಲಾದ ಹಲವಾರು ಕಟ್ಟಡಗಳಿವೆ. ಅಷ್ಟೇ ಏಕೆ ಬೆಂಗಳೂರಿನAತೆ ಬೆಳಗಾವಿಯಲ್ಲಿ ಕೂಡ ಶೇ.40ರಷ್ಟು ಅನಧಿಕೃತ ಕಟ್ಟಡಗಳೇ ಇವೆ. ಕೃಷಿ ಜಮೀನುಗಳಲ್ಲಿ ಎನ್.ಎ. ಆದೇಶವಿಲ್ಲದೇ, ಲೇಔಟ್ ಇಲ್ಲದೇ, ಅಥವಾ ಬೈಲಾ ಪ್ರಕಾರ ಕಟ್ಟಡ ನಿರ್ಮಾಣ ಮಾಡದೇ ಹಾಗೂ ತೆರಿಗೆ ಪಾವತಿಸದೇ ಸರ್ಕಾರಕ್ಕೆ ಕೋಟ್...

ಸುವರ್ಣ ಸೌಧವೋ, ದುರಂತಸೌಧವೋ?

 ಸುವರ್ಣ ಸೌಧವೋ, ದುರಂತಸೌಧವೋ?   ಸುವರ್ಣಸೌಧ ಸ್ವಚ್ಛತೆಗೂ ಹಣವಿಲ್ಲದ ಕಾರಣ ಗುತ್ತಿಗೆದಾರರು ಟೆಂಡರ ಕೈಬಿಟ್ಟಿರುವುದನ್ನು ಇತ್ತೀಚಿಗೆ ಪತ್ರಿಕೆಗಳಲ್ಲಿ ಓದಿ ಖೇದವಾಯಿತು. ಸ್ವಾತಂತ್ರö್ಯ ಪಡೆದ ನಂತರ ಭಾರತ ದೇಶವನ್ನು ಭಾಷಾವಾರು ಪ್ರಾಂತಗಳನ್ನಾಗಿ ವಿಂಗಡಿಸಿ ಹಲವಾರು ರಾಜ್ಯಗಳನ್ನು ರಚಿಸಿರುವುದು ಮತ್ತು ಅದರಂತೆ ಮೊದಲು ಮೈಸೂರು ಎಂಬ ಹೆಸರಿನಲ್ಲಿ ರಾಜ್ಯ ರಚನೆಯಾಗಿ ತದನಂತರ ಕರ್ನಾಟಕ ಎಂದು ಕರೆಸಿಕೊಳ್ಳುತ್ತಿರುವುದು ಎಲ್ಲರಿಗೆ ತಿಳಿದಿರುವ ವಿಷಯ. ಭಾಷಾವಾರು ವಿಂಗಡನೆಯೇನೋ ಆಯಿತು ಆದರೆ ರಾಜಧಾನಿಯಿಂದ ದೂರವಿರುವ ನಾಡಿನ ಜನತೆಗೆ ಅಭಿವೃದ್ಧಿ ಎಂಬುದು ಮರೀಚಿಕೆಯಾಗಿ ಉಳಿಯಿತು. ಮುಂಬೈ ಕರ್ನಾಟಕ ಮತ್ತು ಹೈದರಾಬಾದ ಕರ್ನಾಟಕ ಎಂದು ಕರೆಯಲ್ಪಡುವ ಈ ಉತ್ತರ ಕರ್ನಾಟಕದ ಭಾಗಗಳ ವಿಷಯ ಬಂದಾಗ ನಾಡು-ನುಡಿಗಳ ಭಾವನಾತ್ಮಕ ಅಂಶಗಳನ್ನು ಮುಂದೆ ಮಾಡಿ, ವಾಸ್ತವವನ್ನು ಮರೆಸುವ ಕಾಯಕವನ್ನೇ ಎಲ್ಲರೂ ಮಾಡುತ್ತಾ ಬಂದಿದ್ದಾರೆ. ಸಮಗ್ರ ಕರ್ನಾಟಕ ಎಂಬ ಪರಿಕಲ್ಪನೆಗೆ ಯಾರ ವಿರೋಧವೂ ಇಲ್ಲ. ಆದರೆ ಅದು ಮಲತಾಯಿ ಧೋರಣೆಯಿಂದ ಪೋಷಣೆಗೊಳ್ಳುವುದು ಎಷ್ಟು ಸಮಂಜಸ ಎಂಬುದೇ ಎಲ್ಲರ ಪ್ರಶ್ನೆಯಾಗಿದೆ. ಈ ನಾಡು-ನುಡಿಗಳ ಭಾವನಾತ್ಮಕ ಅಂಶಗಳೇ ಎಲ್ಲವನ್ನೂ ತೀರ್ಮಾನಿಸುವುದಾಗಿದ್ದರೆ, ಜಾರ್ಖಂಡ, ಉತ್ತರಾಖಂಡ, ಇತ್ತೀಚಿನ ತೆಲಂಗಾಣ ರಾಜ್ಯಗಳು ರಚನೆಯಾಗುತ್ತಿರಲಿಲ್ಲ. ವಾಸ್ತವದಲ್ಲಿ ಬೆಂಗಳೂರಿಗರಿಗೆ ಈ ಭಾಗದ ಬಗ್ಗೆ ಅನುಕಂಪವಿದೇ ಹೊರತು ಅನುರಾಗವಿಲ್ಲ ಮ...

ಉತ್ತರ ಕಾಣದ ಉತ್ತರ ಕರ್ನಾಟಕದ ಸಮಸ್ಯೆಗಳಿಗೆ ಪರಿಹಾರ ಕುರಿತು, (ಸುವರ್ಣಸೌಧ ಮತ್ತು ಉಚ್ಛ-ನ್ಯಾಯಾಲಯ ಪೀಠಗಳ ಸಮರ್ಪಕ ಬಳಕೆಗಾಗಿ ಬೇಡಿಕೆ)

 ಇಂದ,  ಸಮಸ್ತ ಉತ್ತರ ಕರ್ನಾಟಕದ ಜನತೆಯ ಪರವಾಗಿ,  ಬೆಳಗಾವಿಯ ಜನಪರ ನ್ಯಾಯವಾದಿಗಳು  ಬೆಳಗಾವಿ. ಇವರಿಗೆ,  ಮಾನ್ಯ ಜಿಲ್ಲಾಧಿಕಾರಿಗಳು,  ಬೆಳಗಾವಿ.    ವಿಷಯ - ಉತ್ತರ ಕಾಣದ ಉತ್ತರ ಕರ್ನಾಟಕದ ಸಮಸ್ಯೆಗಳಿಗೆ ಪರಿಹಾರ ಕುರಿತು, (ಸುವರ್ಣಸೌಧ ಮತ್ತು  ಉಚ್ಛ-ನ್ಯಾಯಾಲಯ ಪೀಠಗಳ ಸಮರ್ಪಕ ಬಳಕೆಗಾಗಿ ಬೇಡಿಕೆ)    ಮಾನ್ಯರೇ,  ಈ ಕೆಳಗೆ ಸಹಿ ಮಾಡಿರುವ ಬೆಳಗಾವಿಯ ಜನಪರ ನ್ಯಾಯವಾದಿಗಳು ತಮ್ಮಲ್ಲಿ ಬಿನ್ನವಿಸುವುದೇನೆಂದರೆ,  ಸ್ವಾತಂತ್ರö್ಯ ಪಡೆದ ನಂತರ ಭಾರತ ದೇಶವನ್ನು ಭಾಷಾವಾರು ಪ್ರಾಂತಗಳನ್ನಾಗಿ ವಿಂಗಡಿಸಿ ಹಲವಾರು ರಾಜ್ಯಗಳನ್ನು ರಚಿಸಿರುವುದು ಮತ್ತು ಅದರಂತೆ ಮೊದಲು ಮೈಸೂರು ಎಂಬ ಹೆಸರಿನಲ್ಲಿ ರಾಜ್ಯ ರಚನೆಯಾಗಿ ತದನಂತರ ಕರ್ನಾಟಕ ಎಂದು ಕರೆಸಿಕೊಳ್ಳುತ್ತಿರುವ ಬಗ್ಗೆ ತಮಗೆ ತಿಳಿದಿರುವ ವಿಷಯ. ಭಾಷಾವಾರು ವಿಂಗಡನೆಯೇನೋ ಆಯಿತು ಆದರೆ ರಾಜಧಾನಿಯಿಂದ ದೂರವಿರುವ ನಾಡಿನ ಜನತೆಗೆ ಅಭಿವೃದ್ಧಿ ಎಂಬುದು ಮರೀಚಿಕೆಯಾಗಿ ಉಳಿಯಿತು. ಮುಂಬೈ ಕರ್ನಾಟಕ ಮತ್ತು ಹೈದರಾಬಾದ ಕರ್ನಾಟಕ ಎಂದು ಕರೆಯಲ್ಪಡುವ ಈ ಉತ್ತರ ಕರ್ನಾಟಕದ ಭಾಗಗಳ ವಿಷಯ ಬಂದಾಗ ನಾಡು-ನುಡಿಗಳ ಭಾವನಾತ್ಮಕ ಅಂಶಗಳನ್ನು ಮುಂದೆ ಮಾಡಿ, ವಾಸ್ತವವನ್ನು ಮರೆಸುವ ಕಾಯಕವನ್ನೇ ಎಲ್ಲರೂ ಮಾಡುತ್ತಾ ಬಂದಿದ್ದಾರೆ. ಸಮಗ್ರ ಕರ್ನಾಟಕ ಎಂಬ ಪರಿಕಲ್ಪನೆಗೆ ಯಾರ ವಿರೋಧವೂ ಇಲ್ಲ. ಆದರೆ ಅದು ಮಲತಾಯಿ ಧೋರಣೆಯಿಂದ ಪೋಷಣೆಗೊಳ್...